Saturday 19 June 2010

ಪ್ರಾರ್ಥನೆ

ನಾಳೆಗಳ ಭಯದಲ್ಲಿ ನಿನ್ನೆಗಳ ಹತಾಶೆಯಲ್ಲಿ
ಕಳೆಯುತ್ತಿದೆ ಇಂದಿನ ಸುಂದರ ದಿನ

ಅವರಿವರ ಕಟುಕುಟುಕು ಮಾತಿನಲ್ಲಿ
ಮನವಿರಿಯುವ ಅಗೌರವದ ನೀತಿಯಲ್ಲಿ
ಮರೆತಿರುವೆ ಜೀವನದ ಗುರಿಯ

ರಾಮನಿಗೂ ತಪ್ಪಿದ್ದಲ್ಲ ಅಪವಾದ
ಸೀತೆಗೂ ತಪ್ಪಿದ್ದಲ್ಲ ನಿಂದನೆ
ಹುಲುಮಾನವನಾದ ನನಗೇಕೆ ಚಿಂತೆ

ನನ್ನಂತರಂಗವ ಶುದ್ದವಾಗಿಟ್ಟು ಕೊಂಡು
ನಿನ್ನ ಕರುಣೆಯ ಸೆಲೆಯ ಮರೆಯದೆ
ಬದುಕುವ ಬಾಗ್ಯವ ಕೊಡು ದೇವಾ

About Me

My photo
ಪ್ರೀತಿಯಿಂದ ಪ್ರೀತಿಗಾಗಿ ಪ್ರೀತಿಗೋಸ್ಕರ ಬದುಕುತ್ತಿರುವ ನಿರುಪದ್ರವಿ ಮಾನವ ಪ್ರಾಣಿ